Friday 3 February 2012

ಜೀವನದ ಸತ್ವ

ಒಮ್ಮೆ ಕಾಡಿನಲ್ಲಿ ಒಬ್ಬ ಪ್ರಯಾಣ ಮಾಡುತ್ತಿದ್ದ...ಹಾಗೆ ಓಡಾಡುತ್ತಿದ್ದಾಗ ಹಿಂದೆ ಏನೋ ಶಬ್ದ ಬಂದಂತೆ ಅನಿಸಿತು..ಆವನು ತಿರುಗಿ ನೋಡಲಿಲ್ಲ..
ಹಾಗೆ ಮುಂದೆ ಹೋಗುತ್ತಿದ್ದಂತೆ ಶಬ್ದ ಇನ್ನು ಜಾಸ್ತಿ ಆಯಿತು...ಆದರು ಗಮನಿಸಲಿಲ್ಲ...
ಕೊನೆಗೆ ಶಬ್ದ ಜೋರಾದಾಗ ಹಿಂದೆ ತಿರುಗಿ ನೋಡ್ತಾನೆ..."ಹುಲಿ"...ಅಬ್ಬೋ..ಗಾಬರಿ ಇಂದ ಓಡ್ತಾನೆ...ಓಡ್ತಾನೆ..........
ಹಾಗೆ ಒಡ್ತೈದ್ದಾಗ...ಮುಂದೆ ಒಂದು ಭಾವಿ ಲಿ ಕಾಲು ಜಾರಿ ಬಿದ್ದುಬಿಡ್ತಾನೆ...!!!ಪಾಪ
ಆದ್ರೆ ಅವನಿಗೆ ಒಂದು ಮರದ ಬೇರು ಭಾವಿಯಲ್ಲಿ ಆಸರೆಯಾಗಿ ಸಿಗತ್ತೆ...ಅದನ್ನೇ ಹಿಡ್ಕೊಂಡು ನೆತಾಡುತಿರ್ತಾನೆ...
ಹಾಗೆ ಭಾವಿಗೆ ಹಾರೋಣ ಅಂತ ಕೆಳಗೆ ನೋಡ್ತಾನೆ "ದೊಡ್ಡದೊಂದು ಹೆಬ್ಬಾವು"!!!!!!!!
ಹೇಗೋ ಬದುಕಿಕೊಂಡರೆ ಆಯಿತು ....ಸ್ವಲ್ಪ ಹೊತ್ತು ಈ ಬೇರು ಹಿಡ್ಕೊಂಡೆ ಇರ್ತೀನಿ ಅಂತ ಯೋಚನೆ ಮಾಡೋ ಹೊತ್ತಿಗೆ ...
ದೊಡ್ಡದೊಂದು ಹೆಗ್ಗಣ ಆಆಸರೆ ಆಗಿದ್ದ ಬೇರನ್ನು ಕಡಿತಾ ಇರತ್ತೆ ......
ಬದುಕುವ ಯಾವ ಆಸರೆಯೂ ಇಲ್ಲ......:-(
ಹಾಗೆ ಮೇಲೆ ನೋಡ್ತಾನೆ......ಮರದ ಮೇಲೆ ಜೇನು ಗೂಡು ಇರತ್ತೆ....ಅಲ್ಲಿಂದ ಒಂದೇ ಒಂದು ಜೇನು ಹನಿ ಬಿಳತ್ತೆ ......
ಇವನು ಅಂತಹ ದುಖದ ಮಧ್ಯೆಯೂ...ನಾಲಿಗೆ ಚಾಚಿ...ಆಆಆಆಆಆ ......ಅಂತ ಬಾಯಿ ಬಿಡ್ತಾನೆ...!!!!
(ನಮಗೂ ಹಾಗೆ ಅಲ್ವೇ...ಬದುಕುವ ಯಾವ ಆಸರೆಯೂ ಇಲ್ಲದೆ ಇದ್ರೂ...ಮಧ್ಯದಲ್ಲಿ ಇಂತಹದೊಂದು ಕ್ಷಣಿಕ ಆನಂದ ಸಿಕ್ರೆ ನಾಲಗೆ ಚಾಚುತ್ತೇವೆ......!!)

No comments:

Post a Comment