Thursday 14 February 2013

ನಾನು ನಿಧನವಾಗಿಬಿಟ್ಟೆ..!!


 ನಾನು ನಿಧನವಾಗಿಬಿಟ್ಟೆ.....
ಭೂತವೆಂಬ ಸಮಾಧಿಯಲ್ಲಿ ನನ್ನ ಹೂಳ ಹೊರಟಿರಿ.

ನನ್ನ ಈ ಉತ್ಕ್ರಮಣ,ದುರ್ಬಲದ ಸಂಕ್ರಮಣ
ನನ್ನ ನೋವ ಉದಧಿಯಾಗಿ ಮಾಡಿಬಿಟ್ಟಿರಿ.

ಪರಂಪರೆಯ ಸ್ವಾರ್ಥಗಳ ಎಳ್ಳು ಹಾಕಿ
ಪೂರ್ವಾಗ್ರಹದ ಅಕ್ಕಿ ಬೆರೆಸಿ
ನನ್ನ ಬಾಯ ಅಂದು ನೀವು ಮುಚ್ಚಿಬಿಟ್ಟಿರಿ

ಪುರಾತನದ ನೀರು ಸುರಿದು
ಬೇಧವೆಂಬ ಬಟ್ಟೆ ಹೊಡೆಸಿ
ಮೌಡ್ಯತೆಯ ಚಟ್ಟಕ್ಕೆನ್ನ ಹೊರೆಸೆಬಿಟ್ಟಿರಿ

ಅವರು ಇವರು ನೀವು ತಾವು
ನಾಕು ಜನರು ಹೆಗಲುಗೊಟ್ಟು
ಮೌನವೆಂಬ ಮೆರವಣಿಗೆಯಲ್ಲಿ
ಮಸಣಕೆನ್ನ ತಂದೆಬಿಟ್ಟಿರಿ

ಮೊದಲೇ ಅಗೆದು ತೆಗೆದು ಇಟ್ಟ ಗುಂಡಿಯಲ್ಲಿ....ನನ್ನ.
ಹೇಳ ಹೆಸರು ಇಲ್ಲದೇನೆ
ಐಬುಗಳ ಮಣ್ಣು ಸುರಿದು...ಮುಚ್ಚಿಬಿಟ್ಟಿರಿ..

ಹೊಸತಾಗಿ ಬಾಳದೆಯೇ
ನನ್ನನ್ನು ಅರಿಯದೆಯೇ...
ಎಲ್ಲರಂತೆ ನಾನು ಅಂದು..
'ನಿಧಾನವಾದೆನು'.....ನಿಧನವಾಗಿಬಿಟ್ಟೆನು....!!

Friday 3 February 2012

PLEASE ಇವೆಲ್ಲವನ್ನೂ ಬಿಟ್ಟು ಇನ್ನೇನಾದ್ರು ಇದ್ರೆ ಹೇಳಿ.....

೧.ಒಬ್ಬ ವೇಶ್ಯೆಯ ಬಗ್ಗೆ ಏನು ಹೇಳಲಾದೀತು...
ಜೀವನದಲ್ಲಿ ನೋವುಂಡ ಒಬ್ಬ ವ್ಯಕ್ತಿ ಅಥವಾ ವಾಂಚೆಗೆ ಹೋಗುವ ವ್ಯಕ್ತಿ..ಮಾಂಸದ ಬೀದಿಗೆ ಹೋಗಿ,ಅವಳನ್ನು ಕಂಡು,ಅವಳ ಮಡಿಲಲ್ಲಿ ತಲೆಯಾಗಿ...
"ನೀ ಯಾಕೆ ಹೇಗೆ ಬದುಕುತ್ತೀಯ ಅಂತ ಕೇಳಿ??"..."ನೀನು ಇಂತಹ ಜಾಗಕ್ಕೆ ಮೊದಲು ಬಂದಿಲ್ವೆ??ಯಾರು ಈ ಥರ ಕೇಳೋಲ್ಲ"ಅಂತ ಅವಳು...ಅವನು...ಕಥೆಗಳಲಿ ರಾತ್ರಿ ಕಳೆಯುವ...TRANSFORMS ಗಳನ್ನೂ ಬಿಟ್ಟು...ಬೇರೆನಾದರು ಹೇಳೋದಿದ್ಯ??

೨.ಒಂದು TV ಯ ಬಗ್ಗೆ ಏನು ಹೇಳಲಾದೀತು??
ಯಾರದೋ ಹಂಗಿನ ಚಾನೆಲ್ಗಳು...ಅವರ ಕಥೆಗಳು..ರಾಜಕೀಯಗಳು....ಅವಳು ವಾಂತಿ ಮಾಡಿದಳಂತೆ...ಇವಳು ಎತ್ತಿಹಾಕಿದ್ಳಂತೆ...ಅವಳು ಬಸುರಿಯಂತೆ...ಹ್ಯಾಗಂತೆ...ಮಗುವಾಯ್ತಂತೆ...ಹೇಗಂತೆ....ಊಟವೇ ಮಾಡೋಲ್ವಂತೆ...ಹಾಗಂತೆ..ಹೀಗಂತೆ...ಕೊನೆಗೆ...."ಹೀಗೂ ಉಂಟೆ"..

೩.ಪದ್ಯ/ ಕವಿತೆಗಳ/ಕವಿಗಳ.. ಬಗ್ಗೆ ಇನ್ನೇನು ಹೇಳಲಾದೀತು...
ಪ್ರೇಮ ಸಲ್ಲಾಪಗಳು,ತಿರುಚಿದ ಅನುವಾದಗಳು,ಕದ್ದು ಬರೆದು ತಾನೇ ಬರೆದೆ ಎನ್ನುವ ವ್ಯಕಿಗಳು...ಬುದ್ಧಿ ಜೀವಿಯ ಗಡ್ದಗಳು....ಹೊಟ್ಟೆ ಉರಿಗಳು..ಪ್ರಶಸ್ತಿಗಳು...ಹಿಂಸೆಗಳು...ಅವುಗಳು..ಇವುಗಳು...

೪.ಒಂದು ಚಲನಚಿತ್ರದ ಬಗ್ಗೆ ಏನು ಹೇಳಲಾದೀತು...
ಕಂಡೋರ ಜೀವನದ ಕಥೆಗಳು...ಹೋಲಿಸಿದ ನಟನೆಗಳು...ಸಿಲ್ಕ್ ಸ್ಮಿತಾಳ ಹೆಸರಿನಲ್ಲಿ...ಇವರು... ದೋಚಿ ಬಾಚಿದ ದುಡ್ಡುಗಳು....ಎಂಜಾಯ್ ಮಾಡುವ ನಾವುಗಳು..
ಡಬ್ಬಿಂಗ್ ಗಳು...ಕೆಟ್ಟ ಹಾಡುಗಳು...ಕುರಿ...ಕೋಳಿ...ಕಬ್ಬಿಣಗಳು...ಹಳೆ ಪಾತ್ರೆಗಳು...

೫.ಒಂದು ಸ್ಕೂಲ್ ನ ಬಗ್ಗೆ ಏನು ಹೇಳಲಾದೀತು...??
ಅದೇ ಪಾಠಗಳು ....ಪದ್ಯಗಳು...ಸಂಬಳದ ಅನಿವಾರ್ಯತೆಯ ಮೇಷ್ಟ್ರುಗಳು...ಮೌಲ್ಯವಿರದ theory ಗಳು ...ಸಣ್ಣ ವಯ್ಯಸಿಗೆ COMPETITION ಗಳು...ಜಿಗುಪ್ಸೆಗಳು...ಆತ್ಮಹತ್ಯೆಗಳು...
ಅಣು ವನ್ನು ವಿಂಗಡಿಸೋದು ಕಲಿಸ್ತಾರೆ...ಅಣು ಅಣುವಾಗಿ ಜೀವನವನ್ನ ಅರ್ಥ ಮಾಡ್ಕೊಳ್ಳೋದು...ಹೇಳ್ಕೊದೊದಿಲ್ಲ್ವೆ....

PLEASE ಇವೆಲ್ಲವನ್ನೂ ಬಿಟ್ಟು ಇನ್ನೇನಾದ್ರು ಇದ್ರೆ ಹೇಳಿ.....

'ನಾನು' ನಿಧನವಾಗಿಬಿಟ್ಟೆ.....

'ನಾನು' ನಿಧನವಾಗಿಬಿಟ್ಟೆ.....
'ಭೂತವೆಂಬ' ಸಮಾಧಿಯಲ್ಲಿ ನನ್ನ ಹೂಳ ಹೊರಟಿರಿ.

ನನ್ನ ಈ ಉತ್ಕ್ರಮಣ,ದುರ್ಬಲದ ಸಂಕ್ರಮಣ
ನನ್ನ ನೋವ ಉದಧಿಯಾಗಿ ಮಾಡಿಬಿಟ್ಟಿರಿ.

ಪರಂಪರೆಯ 'ಸ್ವಾರ್ಥಗಳ' ಎಳ್ಳು ಹಾಕಿ
'ಪೂರ್ವಾಗ್ರಹದ' ಅಕ್ಕಿ ಬೆರೆಸಿ
ನನ್ನ ಬಾಯ ಅಂದು ನೀವು ಮುಚ್ಚಿಬಿಟ್ಟಿರಿ

'ಪುರಾತನದ' ನೀರು ಸುರಿದು
'ಬೇಧವೆಂಬ' ಬಟ್ಟೆ ಹೊಡೆಸಿ
'ಮೌಡ್ಯತೆಯ' ಚಟ್ಟಕ್ಕೆ ನನ್ನ ಹೊರೆಸೆಬಿಟ್ಟಿರಿ

ಅವರು, ಇವರು, ನೀವು, ತಾವು
ನಾಕು ಜನರು ಹೆಗಲುಗೊಟ್ಟು
'ಮೌನವೆಂಬ' ಮೆರವಣಿಗೆಯಲ್ಲಿ
ಮಸಣಕೆನ್ನ ತಂದೆಬಿಟ್ಟಿರಿ

'ಮೊದಲೇ ಅಗೆದು' ತೆಗೆದು ಇಟ್ಟ ಗುಂಡಿಯಲ್ಲಿ....ನನ್ನ.
ಹೇಳ ಹೆಸರು ಇಲ್ಲದೇನೆ
'ಅಇಬುಗಳ' ಮಣ್ಣು ಸುರಿದು...ಮುಚ್ಚಿಬಿಟ್ಟಿರಿ..

'ಹೊಸತಾಗಿ' ಬಾಳದೆಯೇ
'ನನ್ನನ್ನು' ಅರಿಯದೆಯೇ...
ಎಲ್ಲರಂತೆ ನಾನು ಅಂದು..
ನಿಧನವಾದೆನು....ನಿಧಾನವಾಗಿಬಿಟ್ಟೆನು....

ಹಾಗೆ ಪೋಣಿಸಿದ್ದು....ಅವಳಿಗಾಗಿ

ನನ್ನವಳು ಹೊರತಾಳ ನೀರಿಗೆ...
ಜೊತೆಗೆ ನೀ ಹೋಗುವೆಯಾ ವಾರಿಜೆ...

ಹಸಿರುಟ್ಟು...ಹೂ ಸೆಗೆಸಿ....
ನೆರಿಗೆಯ ನೊದೆಯುತ ......ಹೊರತಾಳ....
ಶಾನುಭೋಗರ ಮನೆಯ ಹಾದಿಯದು ಸರಿ ಇಲ್ಲ...ಎಡವಿ ಬಿದ್ದಾಳ...
ದಯಮಾಡಿ ಜೊತೆ ಹೋಗೆ ವಾರಿಜೆ..

ಕೆರೆಯ ದಂಡೆಯ ತೀರ..
ಬಿಂದಿಗೆಯನೋಯ್ಯುತ..ಹೊರಟಾಗ ನನ್ನವಳು.
ಮಾಗೀಯ ಚಳಿ ಗಾಳಿ...ಮುಂಗುರುಳನು ತಾಕಿ..
ಕಣ್ಮುಚ್ಚಿ ಬಿದ್ದಾಳ....
ದಯಮಾಡಿ ಜೊತೆ ಹೋಗೆ ವಾರಿಜೆ...

ಮನದನ್ನೆ ನನ್ನಾಕೆ...ಹೂವಂತೆ ಸಲಹಿರುವೆ..
ಪ್ರೀತಿಯನು ಎರೆದಿರುವೆ...
ಅವಳಿಂದ ನಾ ಎಲ್ಲ....ನನಸನ್ನು ಕಂಡಿರುವೆ...
ದಯಮಾಡಿ ಜೊತೆ ಹೋಗೆ ವಾರಿಜೆ...

ಬರುವಾರ ಸಂತೆಯಲಿ...ನಿನಗೆಂದು..
ಹುರಿಗಡಲೆ, ಬಳೆ ತರುವೆ...
ದಮ್ಮಯ್ಯ ಜೊತೆ ಹೋಗೆ ವಾರಿಜೆ...
ನನ್ನವಳ ಹಿತ ನೀನು ನೀರಜೆ....

(ಹಾಗೆ ಪೋಣಿಸಿದ್ದು....ಅವಳಿಗಾಗಿ)

ಬಾಡಿಗೆ ಜಾಸ್ತಿಯಾಯ್ತು ...ಮನೆ ಖಾಲಿ ಮಾಡೋದಿದೆ.

ಬಾಡಿಗೆ ಜಾಸ್ತಿಯಾಯ್ತು ...ಮನೆ ಖಾಲಿ ಮಾಡೋದಿದೆ.
ಎಷ್ಟು ಮನೆಯಾಯ್ತೋ??ಒಂದು,ಎರಡು,ಐದು........ಎಂಟು.
ಒಂಥರಾ ದೊಂಬರ ಜೀವನ...

ಪ್ರಯಾಸವಂತು ಯಾಕೆ..ಏನಿದೆ ಅಂಥದ್ದು..
ಆದೆ ಹಳೆಯ ಹಂಡೆ...ಅವಳ ಅಪ್ಪ ಕೊಟ್ಟದ್ದು...
ಮುದುರಿಟ್ಟ ಹಾಸಿಗೆ...ನಾ ತಂದದ್ದು...
ಹೊತ್ತಿಗೆ ಬೇಯಿಸಲು ನಾಕು ಪಗಾರ....ಅಸ್ಟೆ.

ಬಿಸಿ ನೀರಿಗೆ ಹಂಡೆಯೇ ಬೇಕೇ?
ತಿಂಗಳಾದರೆ ಕರಳು ಕಿವುಚಿ ಬರುವುದು...ಕಣ್ಣಿನಲ್ಲೂ...
ಅದೇ ತೋಯುವುದು ಮೈ ಪೂರ್ತಿ...ಬಿಸಿ ಬಿಸಿಯಾಗಿ...

ಬರುವ ಸಂಬಳ ಎಂತಕೆ??
ಬೇಳೆ-ಕಾಳು.....ಕಸ-ಕಡ್ಡಿಗೆ...ಕಾಪೀ ಪುಡಿಗೆ....
ಫಿಜು-ಗೀಜಿಗೆ.....ಮಕ್ಕಳ ಗೋಜಲಿಗೆ..

ಅವಳಿಗೆ ಹೇಳಿದ್ದೆ-" ಗಂಜಿ ಮಾಡಿಬಿಡು...."
ಅಮೃತದಂತೆ ಮಾಡಿದ್ದಳು ಅಂಬಲಿಯನು...
ಅವಳು ಎಲ್ಲವನು ಹೊಂದಿಸಿಕೊಂದು ಹೋಗುವಾಕೆ.....ನನ್ನಾಕೆ..!!

ಹೊಟ್ಟೆ ತುಂಬಾ ಕುಡಿದು....ಮೈ ಮುರಿದು......
ಮಲಗಿದೆ...ಮುದುರಿಟ್ಟ ಬಂತೆಯಲಿ.....

ಜೀವನದ ಸತ್ವ

ಒಮ್ಮೆ ಕಾಡಿನಲ್ಲಿ ಒಬ್ಬ ಪ್ರಯಾಣ ಮಾಡುತ್ತಿದ್ದ...ಹಾಗೆ ಓಡಾಡುತ್ತಿದ್ದಾಗ ಹಿಂದೆ ಏನೋ ಶಬ್ದ ಬಂದಂತೆ ಅನಿಸಿತು..ಆವನು ತಿರುಗಿ ನೋಡಲಿಲ್ಲ..
ಹಾಗೆ ಮುಂದೆ ಹೋಗುತ್ತಿದ್ದಂತೆ ಶಬ್ದ ಇನ್ನು ಜಾಸ್ತಿ ಆಯಿತು...ಆದರು ಗಮನಿಸಲಿಲ್ಲ...
ಕೊನೆಗೆ ಶಬ್ದ ಜೋರಾದಾಗ ಹಿಂದೆ ತಿರುಗಿ ನೋಡ್ತಾನೆ..."ಹುಲಿ"...ಅಬ್ಬೋ..ಗಾಬರಿ ಇಂದ ಓಡ್ತಾನೆ...ಓಡ್ತಾನೆ..........
ಹಾಗೆ ಒಡ್ತೈದ್ದಾಗ...ಮುಂದೆ ಒಂದು ಭಾವಿ ಲಿ ಕಾಲು ಜಾರಿ ಬಿದ್ದುಬಿಡ್ತಾನೆ...!!!ಪಾಪ
ಆದ್ರೆ ಅವನಿಗೆ ಒಂದು ಮರದ ಬೇರು ಭಾವಿಯಲ್ಲಿ ಆಸರೆಯಾಗಿ ಸಿಗತ್ತೆ...ಅದನ್ನೇ ಹಿಡ್ಕೊಂಡು ನೆತಾಡುತಿರ್ತಾನೆ...
ಹಾಗೆ ಭಾವಿಗೆ ಹಾರೋಣ ಅಂತ ಕೆಳಗೆ ನೋಡ್ತಾನೆ "ದೊಡ್ಡದೊಂದು ಹೆಬ್ಬಾವು"!!!!!!!!
ಹೇಗೋ ಬದುಕಿಕೊಂಡರೆ ಆಯಿತು ....ಸ್ವಲ್ಪ ಹೊತ್ತು ಈ ಬೇರು ಹಿಡ್ಕೊಂಡೆ ಇರ್ತೀನಿ ಅಂತ ಯೋಚನೆ ಮಾಡೋ ಹೊತ್ತಿಗೆ ...
ದೊಡ್ಡದೊಂದು ಹೆಗ್ಗಣ ಆಆಸರೆ ಆಗಿದ್ದ ಬೇರನ್ನು ಕಡಿತಾ ಇರತ್ತೆ ......
ಬದುಕುವ ಯಾವ ಆಸರೆಯೂ ಇಲ್ಲ......:-(
ಹಾಗೆ ಮೇಲೆ ನೋಡ್ತಾನೆ......ಮರದ ಮೇಲೆ ಜೇನು ಗೂಡು ಇರತ್ತೆ....ಅಲ್ಲಿಂದ ಒಂದೇ ಒಂದು ಜೇನು ಹನಿ ಬಿಳತ್ತೆ ......
ಇವನು ಅಂತಹ ದುಖದ ಮಧ್ಯೆಯೂ...ನಾಲಿಗೆ ಚಾಚಿ...ಆಆಆಆಆಆ ......ಅಂತ ಬಾಯಿ ಬಿಡ್ತಾನೆ...!!!!
(ನಮಗೂ ಹಾಗೆ ಅಲ್ವೇ...ಬದುಕುವ ಯಾವ ಆಸರೆಯೂ ಇಲ್ಲದೆ ಇದ್ರೂ...ಮಧ್ಯದಲ್ಲಿ ಇಂತಹದೊಂದು ಕ್ಷಣಿಕ ಆನಂದ ಸಿಕ್ರೆ ನಾಲಗೆ ಚಾಚುತ್ತೇವೆ......!!)

Saturday 26 November 2011

"ಜವೇರಾ" ಮುಂದೇನು ಮಾಡಬಹುದು??

ಮಸಿದಿಯ ಮುಲ್ಲ "ಜವೆರಾ"ಳ ಎದೆಯನ್ನು ತಿವಿದು ತಿವಿದು ಕೇಳುತ್ತಿದ್ದ...ಹೇಳು ಸೋದರಸಂಬಂಧಿಯಾದ ನಿಜಾಮನೊಂದಿಗೆ ನೀ ಯಾಕೆ ಹೀಗೆ ಮಾಡಿದೆ?
ನಿನಗೆ ಗೊತ್ತಿಲ್ಲವೇ ನಮ್ಮ ಧರ್ಮದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದು?ಕಿಟಕಿಗೆ ಕಟ್ಟಿದ್ದ ಕೈಯನ್ನ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು ಜವೇರಾ...ಹೇಗೋ ಖುದಾನ ಮಾಫಿ ಕೇಳುವಳು ಬಿಟ್ಟುಬಿಡಿ ಎಂದು ಊರಿನ ಇನ್ನೊಬ್ಬ ಹಿರಿಯ ಮುಲ್ಲಾನಿಗೆ ಹೇಳಿ,ಇನ್ನೊಮ್ಮೆ ಹೀಗೆ ಮಾಡಬೇಡ ಎಂದು ಗದರಿಸಿ ಕಳಿಸಿದ್ದ...
ಇನ್ನೊಮ್ಮೆ ಮಾಡಬಾರದೆ?ನಾನು ಮಾಡದೆ ಇರೆನು ನೋಡಿ...ಎಂದು ಮನಸಿನಲ್ಲೇ ಹೇಳಿಕೊಂಡು ಹೊರಬಂದ್ದಿದಳು ಜವೆರಾ..

ಇದೆಲ್ಲ ನಡೆದು ದಿನಗಳೇ ಉರುಳಿದೆ..ಅಲ್ಲ ನಾನು ಮಾಡಿದ್ದ ತಪ್ಪಾದರೂ ಏನು ಪ್ರೀತಿಸಿದ್ದೆ?ಸಂಬಂಧಿಯಾದರೇನು?ಸೋದರಸಂಬಂಧಿಯಾದರೇನು?ಅವನು ಕೊಟ್ಟಂತಹ ಪ್ರೀತಿ ಇವರ್ಯಾರಿಗೆ ಕೊಡಲು ಸಾಧ್ಯವಾಯಿತೇ?ಸಂಬಂಧದ ನೆಪವಿರಿಸಿಕೊಂಡು ಇವರು ಕೊಟ್ಟ ಯಾತನೆ ಹೀನಾಯ...!

ಖುದಾನ ಅವಕೃಪೆಗೆ ಎಂದು ಒಳಗಾದೇನೋ ಗೊತ್ತಿಲ್ಲ..ನಮಾಜ್ ಮಾಡಲು ಮರೆತೇ..ಹೀಗಾಗಿ ಬಿಟ್ಟಿತೆ?..ಅಲ್ಲದೆ ಇನ್ನೇನು..ಎಂದೂ ಬರದ ಅಮ್ಮ ತೋಟದ ಮನೆಗೆ ಅಂದೇ ಯಾಕೆ ಬಂದಳು?ಮಗಳೆಂಬ ಮಮಕಾರವು ಇಲ್ಲದೆ ಮಸಿದಿಯ ಮುಲ್ಲಾನಿಗೆ ಹಿಡಿದುಕೊಟಳು ..ಎಂತಹ ಪ್ರಾಯಶ್ಚಿತ್ತ ಇದು?ಪಾಪ ನನ್ನಿಂದ "ನಿಜಾಮ"ನು ಬಹಿಷ್ಕಾರದಿಂದ ಊರ ಹೊರ ಹೋದ..ಅವನ ಭವಿಷ್ಯವೇನೋ?ಇಲ್ಲಾದರೂ ಯಾರೋ ಇರುತ್ತಿದ್ದರು,ಮಾಂಸದ ಅಂಗಡಿ ಇತ್ತು ಹೇಗೋ ಜೀವನ ನಡೆದು ಹೋಗುತ್ತಿತ್ತು..ಈಗೆಲ್ಲಿದ್ದಾನೋ ಏನೋ?ಮ್ಸ್ಚ್!
ಅವನ ತೆಕ್ಕೆಯಲ್ಲಿ ಹರಿದಾಡಿದ ಒಂದೊಂದು ಭಾವನೆಯು ನನ್ನಲ್ಲಿ ಇನ್ನೂ ಜೀವಂತವಾಗಿದೆ,ಬದುಕಿನ ಆಶಾಗೊಪುರವೇ ಕಟ್ಟಿ ಮೆರೆದಿದ್ದೆವಲ್ಲ..ಒಂದಲ್ಲ ಎರಡಲ್ಲ..ಮೂರು ವರ್ಷ ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಬೆಳೆಸಿದಂತಹ ಸ್ನೇಹ..ಅಲ್ಲ..ಪ್ರೀತಿ ಅದು,ಎಂದೂ ಕಾಮವಾಗಿ ತಿರುಗಲಿಲ್ಲ..ನಿಸ್ವಾರ್ಥ ಪ್ರೀತಿ.
ಇಂತಃ ಪ್ರೀತಿ ಕೇವಲ ಅಮ್ಮನಿಂದ ಹಾಳಾಗಿ ಹೊಇತೆ..

ಸಂಬಂಧದ ಕಾರಣದಿಂದ ನಮ್ಮನ್ನು ದೂರ ಮಾಡಿದರೆ ಇವರು?ನನ್ನ ಜಿಗುಪ್ಸೆ,ಆರ್ತಭಾವ,ಜೀವನದಲ್ಲಿ ಅನುಭವಿಸಿದ ಯಾವ ಯಾತನೆಯೂ ಅವನು ಉಳಿಯಲು ಬಿಡಲಿಲ್ಲ..ಒಂದೊಂದು ಎಳೆಎಳೆಯಾಗಿ ನೀಗಿಸಿದ್ದ..ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶಿಸಿದ್ದ..ನಮ್ಮಿಬ್ಬರ ನಡುವೆ ಯಾವ ಸೋದರಸಂಬಂಧಗಳ ಲಕ್ಷ್ಯವಿರಲಿಲ್ಲ,ಎರಡು ಜೀವಗಳ ಸಮ್ಮಿಲನವಾಗಿದ್ದವು,ಮನಸ್ಸುಗಳು ಮೌನವಾಗೇ ಪ್ರೀತಿಸಿದ್ದವು,ವಿಚಾರಗಳನ್ನೂ ಚರ್ಚಿಸಿದ್ದವು,ಕ್ಷಣ ಕ್ಷಣವು ನನ್ನ ಆಂತರ್ಯದ ಕೂಗು ಅವನಿಗೆ ಕೇಳಿಸುತ್ತಿತ್ತು..ಒಂದು ವಿಚಾರ ಲೋಪವಾದರೂ ಗೊತ್ತಾಗಿಬಿಡುತ್ತಿತ್ತು ನನಗೆ..ಅವನ "ಮೌನ"ಅಬ್ಬ!!ದ್ರುತಿಗೆಡಿಸಿ ಬಿಡುತ್ತಿತ್ತು,ನನ್ನ ಎಲ್ಲಾ ಬೇಜವಾಬ್ದಾರಿಗೂ ಅವನು ಉತ್ತರಿಸುತ್ತಿದ್ದ ರೀತಿಯೇ ಮೌನ..ಗೋಗರೆದು ಕ್ಷಮೆಯಾಚಿಸುತ್ತಿದ್ದೆ,ಮತ್ತೆ ಅಲ್ಲಿಂದ ಹೊಸದಾಗಿ ಪ್ರೀತಿಸಿದವರಂತೆ ನಮ್ಮ ನಡವಳಿಕೆಗಳು..ಎಂತಹ ಮಧುರಾನುಭವ..ಇಂತಹ ಪ್ರೀತಿಯನ್ನು ಇವರು ಸಂಬಂಧದ ನೆಪ ಮಾಡಿ ಕಿತ್ತುಕೊಂಡರೆ ನನ್ನಿ೦ದ??..ಇವರು ಮಾಡಿದ್ದು ಮಾತ್ರ ಅನ್ಯಾಯ??
ಮಸಿದಿಯ ಮುಲ್ಲ ಬರೆ ಹಾಕಿದನೆ?ಕಿಟಕಿಗೆ ಕೈ ಕಟ್ಟಿ..ಚಿ!ಕ್ರೂರವೇ ತುಂಬಿಕೊಂಡ ಅವರ ಮನಸಿಗೆ ನನ್ನ -ಪ್ರೀತಿ ಅರ್ಥವಾದರೂ ಹೇಗಾದೀತು?.ನನ್ನ ಎದೆಯಗಾಯ ಮಾಗಿಲ್ಲ..ಅಲ್ಲಾನ ಹೆಸರಲ್ಲಿ ಬರೆ ಹಾಕಿದರೆ..ಅಲ್ಲಾ ಇಂತಹ ಕ್ರೂರಿಯೇ?..ಆ ಬರೆಗಳು ನನ್ನ ಆಂತರ್ಯವನ್ನು ಸುಡಲು ಸಾಧ್ಯವೇ?ಅಂತಹ ನೂರಾರು ಬರೆ ಹಾಕಿ ನನ್ನ ಸುಟ್ಟರು,ಸಂಬಂಧಗಳನ್ನು ಮೀರಿ ಅವನೊಂದಿಗೆ ಕುರುವೊಡೆದು ಹುಟ್ಟುವ ಹೊಸಚರ್ಮದಂತೆ ಬೆಳೆಯುತ್ತದೆ..ಮತ್ತೆ ಅವನು ಎಲ್ಲಿಯಾದರೂ ಇರಲಿ..ಹುಡುಕಿಕೊಂಡು ಹೋಗುವೆ..ಅವನಿಗೆ ನನ್ನ ಜರೂರತೆ ಇದೆ..ಮತ್ತೆ ಒಂದಾಗುತ್ತೇವೆ..ಏನಾದರು ಆಗಲಿ..
ಖುದಾ ನನಗೆ ಸಹಾಯ ಮಾಡು..

(ಜವೇರ ಮುಂದೇನು ಮಾಡಬಹುದು???)